Friday, January 27, 2012

ಬೆತ್ತಲೆ ಪ್ರಪಂಚ..

ಸಮಯ ೫:೧೨ ಮುಂಜಾನೆ. ಆಫೀಸಿಂದ ಬಂದು ಆಗ್ಲೇ ಒಂದು ಘಂಟೆ ಕಳೆದು ಹೋಯ್ತು.. ಟೀವೀ೯ ಲೀ ಬರೋ ವಾರೆಂಟ್ ಕಾರ್ಯಕ್ರಮ ನು ಮುಗಿದಾಯ್ತು. ಇನ್ನೂ ನಿದ್ದೆ ಬರ್ತಾ ಇಲ್ಲ. ಕಳೆದ ಒಂದು ವರ್ಷದ ಸಮಯದಲ್ಲಿ ಕಳೆದ ಬಣ್ಣದ ಚಿತ್ರಗಳ್ನ ಒಮ್ಮೆ ತೆಗೆದು ಇಣುಕಿ ನೋಡೋ ಆಸೆ ಆದ್ರೆ ಯಾಕೋ ಮನಸ್ಸೇ ಬರ್ತಾ ಇಲ್ಲಾ. ಇತ್ತೀಚಿಗೆ ಯಾಕೋ ಒಂದು ಕೊಲೆ ನೋಡದೇ ಇದ್ರೆ ಊಟ ನಿದ್ದೆ ಎರಡೂ ಸಹ ಮೈಗೆ ಹತ್ತೋದೆ ಇಲ್ಲಾರೀ.





ಕೊಲೆನಾದ್ರೂ ಸರಿ.. ಈಸ್ತೊಂದು ದಿನ ಕೊಲೆ ನೋಡ್ಕೊಂಡೆ ಮಲ್ಗ್ತಾ ಇದ್ದೆರೀ.. ಆದ್ರೆ ಈ ಎರಡು ದಿನಗಳಿಂದ ಬರೀ ರೇಪು.. ಅಡ್ರದ್ದೇ ದೃಶ್ಯವೈಭವ. ನಿನ್ನೆ ಸಂಚಿಕೆಯಲ್ಲಿ ಅದ್ಯಾವ್ದೋ ಇಪ್ಪತ್ತರ ಹರೆಯದ ಹುಡುಗ ಎಪ್ಪತ್ತರ ಹರೆಯದ ಅಜ್ಜಿನ ಅತ್ಯಾಚಾರ ಮಾಡಿದನಂತೆ, ಇವತ್ತು ಇಪ್ಪತ್ತರ ಹರೆಯದ ಮುಗ್ಧ ಬುದ್ಧಿಮಾಂದ್ಯೆಯ ಎಪ್ಪತ್ತರ ಹರೆಯದ ಮಾಜಿ ಮೇಷ್ಟ್ರು ಹಾಳು ಮಾಡಿದನಂತೆ. ಪ್ರಪಂಚ ಯಾಕೆ ಹೀಗಾಗ್ತಾ ಇದೆ ಅಂತ ಇದೆ ಪ್ರಶ್ನೆಯನ್ನ ಸ್ನೇಹಿತರಿಗೆ ಕೇಳೋಣ ಅಂದ್ರೆ ಆವ್ರು ಆಮೇಲೆ ಅದ್ನೆ ದೊಡ್ಡ ವಿಷ್ಯ ಮಾಡ್ಕೊಂಡ್ ನನ್ನ ಮರ್ಯಾದೆಯನ್ನೇ ತೆಗಿತಾರೆ ಆನೊ ಭಯ.. ಸ್ನೇಹಿತರೆ ಹಾಗೆ ಬಿಡಿ. ಸೀರಿಯಸ್ ವಿಷ್ಯ ಆಗ್ಲೀ.. ತಮಾಷೆ ಆಗ್ಲೀ.. ಅದು ತಮಾಷೆ ಮಾತ್ರ:)

ಅದೆಷ್ಟೋ ಜನ ವಿಜ್ಞಾನಿಗಳು, ಜ್ಯೋತಿಷಿಗಳು,ವಿಚಾರವಾಡಿಗಳು ೨೦೧೨ ಪ್ರಪಂಚದ ಪತನ ಅಂತ ಬರೆದಿರೋದು ಸತ್ಯ ಅಂತ ಅನ್ಸುತ್ತೆ.. ಅದು ಅವ್ರೆ ಹೇಳಿದ ಹಾಗೆ ವೈಜ್ಞಾನಿಕವಾಗಿ ಬೃಹತ್ ಹಿಮಪರ್ವತಗಳು ಕರಗಿ, ಜ್ವಾಲಾಮುಖಿ ಆಗಿಯೋ ಅಥವಾ ಭೂಕಂಪ ಆಗಿಯೋ ಆಗುತ್ತೋ ಬಿಡೊತ್ತೋ ಅನ್ನೋದು ಊಹೆ ಮಾತ್ರ.  ಮನುಷ್ಯ ತನ್ನ ಮಾನವೀಯತೆಯನ್ನ ಕಳ್ಕೊಂಡು ಇಂತಾ ಹೇಯ ಕೃತ್ಯಗಳ್ನ ಯಾವಾಗ ಮಾಡೋಕೆ ಶುರು ಹಚ್ಕೊತಾನೋ ಆವಾಗ್ಲೇ ಶುರುಕಂಡ್ರಿ ಪ್ರಪಂಚದ ಪತನ.. ಇದು ಅಕ್ಷರಶಃ ಸತ್ಯ.




ದೇವತೆಗಳು ದಾನವರು ಇಬ್ರೋ ಅಮೃತಕ್ಕೋಸ್ಕರ ಹೊಡೆದಾಡಿದ್ರಂತೆ. ಇಬ್ರಿಗೂ ಬೇಕಾದದ್ದು 'ಅಮೃತ'.. ಎಲ್ಲರಿಗೂ ಐಷಾರಾಮಿ ಜೀವನ ಬೇಕು.. ಮಜಾ ಮಾಡ್ಬೇಕು.. ಬರೀ ಖುಷಿ ಬೇಕು. ಬೇರೆ ಯಾವುದು ಬೇಡ!!

ಹಿರಿಯರು, ಹಳೆ ಸಿನಿಮಾಗಳು ಇದೊಂದು ಡೈಲೋಗ್ ನ ಅದೆಷ್ಟು ಸಾರಿ ಹೇಳಿದರೋ ಅದಕ್ಕೆ ಲೆಕ್ಕವೇ ಇಲ್ಲ. "ಮರಿ, ಹೆಣ್ಣು-ಹೊನ್ನು-ಮಣ್ಣು ಈ ಮೂರಕ್ಕೋಸ್ಕರ ನೀ ಯಾವಾಗ ದುರಾಸೆ ಪಡುತ್ತೀಯೋ, ಅವತ್ತೇ ನಿನ್ನ ಅಂತ್ಯದ ಮೊದಲ ಹೆಜ್ಜೆ' ಅಂತ. ಮನುಷ್ಯ ಹುಟ್ಟಬೇಕಾದ್ರೆ ಹೆಣ್ಣಿನೊಂದಿಗೆ ಹುಟ್ಟುವ.. ಮಣ್ಣಿನಲ್ಲೇ ಆಡುವ (ಸಿಟಿ ಬೇಬಿ ಲೈಫು ಬೇರೆ ಬಿಟ್ಬಿಡಿ!).. ಆದ್ರೂ ಯಾಕೆ ಬುದ್ಧಿ ಬೆಳೆದಮೇಲೆ ಮಾತ್ರ ಈ ವಿಚಾರದಲ್ಲಿ ದಡ್ದನಾಗ್ತಾನೇ ಅಂತ!

ಬಹುಷ್ಯ ಆ ಹೊನ್ನಿನ (ಲಕ್ಷ್ಮಿ ಕಟಾಕ್ಷದ) ಕೃಪೇಯೇ ಇದಕ್ಕೆಲ್ಲ ಕಾರಣ ಅನ್ಸುತ್ತೆ. ಹಣ ಬಂದ ಹಾಗೆ ಮತ್ತೆ ಅವನಿಗೆ ಅದಕ್ಕೆ ಸರಿಯಾಗಿಯೋ ಮಣ್ಣು (ಭೂಮಿ) ಬೇಕು.. ಭೂಮಿಯಲ್ಲಿ ಮಜಾ ಮಾಡೋಕೆ ಒಂದು ಹೆಣ್ಣು ಬೇಕು.. ಏನ್ಸಾರ್ ಈ ಲೈಫು.

ಆಫೀಸಲ್ಲಿ ಸಹೋದ್ಯೋಗಿ ಜೊತೆಗೊಮ್ಮೆ ಊಟಕ್ಕೆ ಕುಳಿತಾಗ ಟೀವೀ ಯಲ್ಲಿ ಭಾರತೀಯ ವಿದ್ಯಾರ್ಥಿಗಳು ಲೆಕ್ಕ ಮತ್ತು ಓದಿನ ವಿಚಾರದಲ್ಲಿ ಈ ವರ್ಷದ ಸಾಲಿನಲ್ಲಿ ಹಿಂದೆ ಇದ್ದಾರೆ ಅನ್ನೋ ವಿಷ್ಯಾನ ಹೇಳ್ತಾ ಇದ್ರು. ಅದನ್ನ ನೋಡಿ ಬೇಜಾರಾಗಿ ಸಹೋದ್ಯೋಗಿಗೆ, "ನಾವು ಇದ್ರಲ್ಲಿ ಹೇಗೆ ಬದಲಾವಣೆ ತರಬಹುದು"? ಅಂತ ಕೇಳಿದ್ಕೆ ನನಗೆ ಆತ ನೀಡಿದ ಉತ್ತರ ಸಿಕ್ಕಾಪಟ್ಟೆ ಬೇಜಾರು ಮಾಡ್ತು. ಆತ ಹೇಳಿದ್ದು, "ರೀ ರಕ್ಷಿತ್, ಸುಮ್ನೇ ಊಟ ಮಾಡಿ.. ಇದನ್ನ ನೀವು ಸರಿ ಮಾಡಿದ್ರೆ, ನಿಮ್ಮ ಸಂಬಳದ ಟ್ಯಾಕ್ಸ್ ಏನಾದ್ರೂ ಕಮ್ಮಿ ಆಗುತ್ತಾ? ದೇಶದ ಬಗ್ಗೆ ನಾವ್ಯಾಕೆ ತಲೆ ಕೆಡ್ಸ್ಕೋಬೇಕು."

ಈ ಮಾತನ್ನ ಹೇಳಿದಾತ ಎರಡು ಮಕ್ಕಳ ತಂದೆ. ಏನ್ರೀ ಅನ್ಸುತ್ತೆ ನಿಮ್ಗೆ?

ಭೂಮಿತಾಯಿ ತನ್ನ ಮಕ್ಕಳಾದ ಪೈರಿಗೆ ಅಂತ ಎದೆ ಹಾಲನ್ನು ಕೊಡುವ ತರ ನೀರನ್ನ ಕೊಟ್ರೆ, ಇಲ್ಲಿನ ಜನ್ರು ಅದನ್ನೇ ಲಾರಿಗಟ್ಟಲೇ ಲೋಡ್ ಮಾಡಿ ಅಪಾರ್ಟ್‌ಮೆಂಟ್ ಗಳಿಗೆ ಸ್ನಾನ ಮಾಡೋಕೆ, ನೆಲ ಒರೆಸೋಕೆ, ಎದುರ್ಗೆ ಇರೋ ಲಾನಿನ ನೆಲಕ್ಕೆ ದುಡ್ಡಿನ ಆಸೆಗೆ ಮಾರ್ಕೊತಾರೆ. ಅಲ್ಲಿ  ತುಂಬು ಬಸುರಿಯಂತೆ ದಪ್ಪ ತೆನೆಯ ಹೊತ್ತ ಬೆಳೆಗಳು ಬಾಯಾರಿ ನೀರು ನೀರು ಅಂತ ಅಳುತ್ವೆ.



ಮನುಷ್ಯ ಯಾಕೆ ಇಷ್ಟೊಂದು ಹೃದಯ ಹೀನ ಆಗ್ತಾ ಇದಾನೆ?  ಕ್ರಿಶ್ಚಿಯನ್ ಸಂಪ್ರದಾಯ ಹೇಳುವ ಹಾಗೆ ಅದೆಷ್ಟೋ ಜನರ ಮಧ್ಯೆ ಯಾರಿಗೂ ತಿಳಿಯದ ಹಾಗೆ 'ಸೈತಾನ' ಸೃಷ್ಟಿ ಆಗ್ತಾನಂತೆ.. ಅವನಿಗೆ ಕರುಣೆ,ಸಂತೋಷ ಆನೊ ಯಾವುದೇ ಭಾವನೆಗಳೂ ಇರೋದಿಲ್ವಂತೆ. ಅವನಿಗೆ ಅಂತ ಭಾವನೆಗಳೊಂದಿಗೆ ಅತಿ ಹೀನ ವಾಗಿ ಆಡುವುದೇ ಒಂದು ಆಟವಂತೆ. ಅಂತದೊಂದು ಪೀಳಿಗೆ ನಮ್ಮೆಲ್ಲರ ಮಧ್ಯೆ ಸೃಷ್ಟಿ ಆಗ್ತಾ ಇದೆಯೇ?

ಮಾನವೀಯತೆ ಕಳ್ಕೊತ ಇದ್ದೇವೆಯೇ? ಸಂಭಂಧಕ್ಕೆ ಬೆಲೆ ಇಲ್ವೇ?

ಇದೇನಾ ಕಲಿಯುಗ? ಇದೇನಾ ೨೦೧೨??

ಇನ್ನೂ ಯೋಚಿಸ್ತಾ ಇದ್ದೇನೆ.. ನಿದ್ದೆ ಬರ್ತಾ ಇಲ್ಲ.. ಬರೆಯೋದಕ್ಕೆ ಮನಸ್ಸು ತುಂಬಿ ಬಂದಿದೆ ಆದ್ರೆ ಶಕ್ತಿ ಇಲ್ಲ..!

ದೆವ್ರೆ.. ನಮ್ಮೆಲ್ರಿಗೂ ಒಳ್ಳೇ ಬುದ್ಧಿ ಕೊಡಪ್ಪಾ..


No comments:

Post a Comment