Monday, April 9, 2012

ಒಂದು ಸಾರಿ ಮಾತಾಡಿ ಹೋಗಮ್ಮ...

               ಮನೆಗೆ ಕರೆ ಮಾಡುವುದ ನಿಲ್ಲಿಸಿದಾಗೆಲ್ಲ ಮನೆಯಿಂದ ರಜನೀ ಕರೆ ಮಾಡಿ, 'ರಕ್ಷಿತ, ನಿನಗೆ ನನ್ನ ನೆನಪೇ ಬರುವುದಿಲ್ಲವಾ'? ಅಂತ ಕೇಳುವುದು ನನಗೆ ಸಾಮಾನ್ಯ. ಹಾಗೆ ಕರೆ ಬಂತೆಂದರೆ ಕರೆ ಬಂದ ಎರಡು ವಾರದೊಳಗಾಗಿ ಮನೆಕಡೆ ಹೋಗಿ ಅವಳಿಗೆ ಮುಖ ತೋರಿಸಿಲ್ಲವೆಂದರೆ ಅವಳೂ,ಅಜ್ಜಿಯೂ ಇಬ್ಬರೂ ಮನ ನೊಂದುಕೊಳ್ಳುವರು. ಅಮ್ಮನಿಗೆ ರಜನೀ ಎಂದೂ,ಅಜ್ಜಿಗೆ ಅಮ್ಮ ಎಂದು ಕರೆಯುವ ನನ್ನ ನೋಡಿ ಪರಿಚಯವಾದ ಹೊಸ ಸ್ನೇಹಿತರಿಂದ ಹಿಡಿದು ಹಳೆ ಪರಿಚಯದ ಸ್ನೇಹಿತರೆಲ್ಲರೂ ಬಯ್ಯುವುದುಂಟು. ಇದಕ್ಕಾಗೇ ಶಾಲೆಯಲ್ಲೂ ಸಹ ಒದೆ ತಿಂದಿದ್ದೇನೆ.. ಆದರೆ ರಜನೀ ಮಾತ್ರ ಎಂದೂ ಬಯ್ದಿಲ್ಲ. ಅವಳಂಥ ಗರ್ಲ್ ಫ್ರೆಂಡ್ ಸಹ ನನ್ನ ಕಯ್ಯಲ್ಲಿ  ಇವತ್ತಿಗೂ ಸಹ ಹುಡುಕಲಾಗಿಲ್ಲ.






                ಎರಡು ತಿಂಗಳಾದರೂ ಮುಖ ತೋರಿಸದ, ವಾರೊಕ್ಕೊಮ್ಮೆಯೂ ಮನೆಗೆ ಕಾಲ್ ಮಾಡದಾಗ ರಜನೀಯ ಕರೆ ಬದರೆ ಅದರಲ್ಲೇ ಆಶ್ಚರ್ಯವಿಲ್ಲ. ಎಂದಿನಂತೆ ಕರೆ ಬಂದು ಮತ್ತೆ ಅದೇ ಪ್ರಶ್ನೆ. ಮಗನೆ, ನಾ ಯಾರೆಂದು ಗುರುತು ಸಿಕ್ಕಿತಾ? ಸರಿ ಕರೆ ಬಂದ ಎರಡನೆ ಶನಿವಾರದ ಸಂಜೆ ಮನೆಯಲ್ಲಿದ್ದೆ. ಈ ಸರಿ ಅವಳನ್ನು ಸ್ವಲ್ಪ ಖುಷಿ ಪಡಿಸುವ ಎಂದು ನನ್ನ ನಕ್ಷತ್ರಿಕ ಮಿತ್ರ 'ಕ್ಯಾಮರಾ' ವನ್ನ ಇಲ್ಲೇ ಬಿಟ್ಟು ಹೋಗಿದ್ದೆ. ಮನೆಗೆ ಹೋದಾಗಲೆಲ್ಲ ಬೆನ್ನಿಗೆ ಸಿಕ್ಕಿಕೊಂಡು ಕಾಡು ಅಳೆಯುವ ನಾನು, ಈ ಸಾರಿ ಅವಳೊಂದಿಗೆ ತುಸು ಸಮಯ ಕಳೆಯುವ ಎಂದೆ ಆಲೋಚಿಸಿದ್ದೆ. ಎಂದಿನಂತೆ ಮನೆಗೆ ಹೋದಾಕ್ಷಣ ಮನೆಯ ನಾಯಿಗಳು ತಮ್ಮ ಮೂಕಪ್ರೀತಿಯನ್ನು ಸ್ವಲ್ಪವೂ ಕಪತವಿಲ್ಲದೇ ಮುಖ,ಕೆನ್ನೆ,ಕೈ,ಮೈ ನೆಕ್ಕಿ ಪ್ರದರ್ಶಿಸಿದವು. ಮನಸ್ಸು ತುಸು ಹಗುರಾಗಿ.. ಎಲ್ಲರೊಂದಿಗೂ ಮಾತನಾಡಿ.. ನನ್ನ ಡಾರ್ಲಿಂಗ್ 'ಅಮ್ಮ' (ಅಜ್ಜಿ) ಯೂ ಸಹ.. 'ಬಂದ್ಯಾ ಮಾರಾಯ'. ಅಂತೂ ನಿನ್ನ ಮುಖ ನೋಡೋ ಭಾಗ್ಯ ಸಿಕ್ಕಿತಪ್ಪ.. ಆ ಫೋನು ಒಂದು ಎಂತಕೆ ನಿನಗೆ, ಮನೆಗೆ ಕರೆ ಮಾಡದ ಮೇಲೆ ಅಂತ ತರಾಟೆಗೆ ತೆಗೆದುಕೊಂಡರೂ, ಅವಳ ಕೋಪ ಹೆಚ್ಚು ಹೊತ್ತಿರುವುದಿಲ್ಲ. ಅವಳ ಮನಸ್ಸೇ ಅಂಥದ್ದು. ನಮ್ಮನೆಯಲ್ಲಿ ಬಹುವಾಚನವಿಲ್ಲ. ಏಕವಚನದಲ್ಲಿ ಪ್ರೀತಿ ಹೆಚ್ಚು. ಅಂತೂ ರಾತ್ರಿ ಊಟ ಎಲ್ಲ ಆಗಿ ನಿದ್ದೆಯೂ ಆಯಿತು. ನಾ ಮನೆಗೆ ಹೋದರೆ, ಅಕ್ಕಿ ರೊಟ್ಟಿ ಅಂತೂ ಗ್ಯಾರಂಟೀ. ಅದು ನನ್ನ ಪ್ರಾಣಕ್ಕೆ ಸಮ. ರೊಟ್ಟಿ ಮಾಡಲು ಬರದ ನಾನು, ಅಮ್ಮನ ಹತ್ತಿರ ಕಳಿಸಿಕೊಡ್ತಿಯಾ ಎಂದಾಗ. ಅವಳು ಹೇಳಿದಂತೆಯೇ, ಹಿಟ್ಟು ಕಲಸಿ.. ಹಾದವನ್ನೂ ಅರಿತು. ಇನ್ನೇನು ಕಾವಲಿ ಮೇಲೆ ಎಣ್ಣೆಯೂ ಸುರಿದಾಯಿತು. ಬಾಳೆ ಎಲೆಯ ಮೇಲೆ ಹಚ್ಚಿದ ರೊಟ್ಟಿಯನ್ನು ಚೋಯ್ ಅಂತ ಕಾವಲಿಯ ಮೇಲೆ ಹಾಕಿದ್ದೂ ಆಯಿತು. ಸುಮ್ಮನೇ ಪರಿಮಳವ ಆನಂದಿಸುತ್ತಿದ್ದ ನನಗೆ ಅಮ್ಮ, 'ರಕ್ಷಿತ,ನಿನಗೆ ನಾಗಮ್ಮ ಗೊತ್ತಾ ಅಂತ ಮಾತಿಗೆಳೆದಳು'. ಆದೆಷ್ಟೂ ಬಾರಿ ನಾವೆಲ್ಲರೋ, ನಮಗಾರಿಯದಂತೆಯೇ ಹೆಸರಿಗೆ ತಕ್ಕ ಮುಖವ ಮನದಲ್ಲೇ ಹುಡುಕುತ್ತೇವೆ. ಅಂತೆಯೇ, 'ಅಮ್ಮ, ಅವಳು ಕಪ್ಪಗೆ ಇದ್ದಾಳಾ? ಉದ್ದ ಜಡೆಯಾ ಎಂದೆ"?

ಇಲ್ಲಾ.. ನಮ್ಮ ನೆಂಟರ ಪೈಕಿಯಲ್ಲಿ ಅವಳೇ ಬೆಳ್ಳಗೆ  ಇದ್ದಳು ಎಂದಾಗ ನನಗೆ ನಾನೇ ಹಳಿದುಕೊಂಡೆ..
ನಾನು: ಇದ್ದಳು?? ಈಗ ಏನಾಯಿತು?
ಅಮ್ಮ: "ಮೊನ್ನೆ ವರೆಗೂ ಇದ್ದಳು.. ಪಾಪ ಮಾರಾಯ. ದೇವತೆಯಂತವಳು.. ಹೋಗಿಬಿಟ್ಟಳು.." ಎಂದು ಸುಮ್ಮನಾದಳು.
ನಾ ಮುಂದುವರಿಸಿದೆ.. 'ಏನಾಗಿತ್ತಂತೆ'?

ಅಮ್ಮ: "ಮುಟ್ಟಾಗಿತ್ತಂತೆ.. ತುಂಬಾ ರಕ್ತಸ್ರಾವ ಆಗ್ತಾ ಇತ್ತಂತೆ. ಹೇಳಿಕೊಳ್ಳುಕೇ ನಾಚಿಕೆ ಪಟ್ಟು ಮುಚ್ಚಿಟ್ಟು ರಕ್ತವೂ ನಿಲ್ಲದೇ ಉಸಿರೇ ನಿಂತು ಹೋಯ್ತಂತೆ. ಹಳ್ಳಿಯವರಣೆಲ್ಲ ದಡ್ಡ ಅಂತೆಲ್ಲ ಹೇಳ್ತಾರೆ. ಇವಳು, ದೇವಸ್ಥಾನದ ಹೊಣೆ ಹೊತ್ತು, ಅಲ್ಲಿಯ ಕೆಲಸ ಮಾಡಿ, ಅಲ್ಲಿ ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡ್ತಾ. ಹೊಲಿಗೆ ಕಸೂತಿ ಅಂತ ಹೇಳಿಕೊಡ್ತಾ ಬಂದ ಹಣದಲ್ಲಿ, ಹುಷಾರಿಲ್ಲದ ಗಂಡನನ್ನೂ ನೋಡ್ಕೋತ ಇದ್ದಳಂತೆ. ಅವಳ ಮಗಳನ್ನೂ ಕಾಲೇಜ್ ಮಾಡಿಸ್ತಾ ಇದ್ಲು.. ಮೊನ್ನೆ ಮೊನ್ನೆ ಮುಟ್ಟು ಮುಗಿದು ಸ್ನಾನ ಆಗಿ ದೇವಸ್ಥಾನಕ್ಕೆ ಹೋಗಿ ಬರ್ಬೇಕಾದ್ರೆ ಯಾರೋ ಮುತ್ತೈದೆ ಕೊಟ್ಟ ಮಲ್ಲಿಗೆ ಮುಡಿದು ಮನೆಗೆ ಬಂದಾಗ ಹುಷಾರಿಲ್ಲದ ಗಂಡನೂ ಸಹ ಒಮ್ಮೆ ಖುಷಿಯಾಗಿ. ಏನೇ ದೇವಿ ತರ ಕಾಣ್ತ ಇದಿಯಾ ಅಂದನಂತೆ. ನಾಗಮ್ಮ ಅದಕ್ಕೆ, ಯಾರೋ ಹೂ ಕೊಟ್ಟರು ಮೂಡಿದೆ ಅಷ್ಟೇ ಎಂದು ಸಾರಾ ಸಗಟಾಗಿ ಉತ್ತರಿಸಿದಳಂತೆ.

ಎಂದಿನಂತೆ ಪುಟ್ಟಿ ಅಮ್ಮನೊಂದಿಗೆ ಮಾತನಾದ್ಬೇಕು ಅಂತ ಮನೆಗೆ ಫೋನಾಯಿಸಿ, ಅಪ್ಪ ಅಮ್ಮನೊಂದಿಗೆ ಮಾತಾದಬೇಕು ಅಂದಾಗ.. ಅಪ್ಪ ಪುತ್ತಿಗೆ, ಅಮ್ಮ ಮನೆಯಲ್ಲಿಲ್ಲ ಬಂದ ಮೇಲೆ ಕಾಲ್ ಮಾಡಲು ಹೇಳ್ತೇನೆ ಅಂದಿದ್ದನಂತೆ.
ಆದರೆ ಸಂಜೆ ಮನೆಗೆ ಬಂದ ನಾಗಮ್ಮ, ಅಡುಗೆಗೆಲ್ಲ ತಯಾರೀ ಮಾಡಿ ಗಂಡನ ಮಂಚದ ಕೆಳಗೆ ಕುಸಿಡಳಂತೆ.. 'ರೀ, ಇನ್ನೂ ನಂಗಾಗಲ್ಲ. ಇನ್ನೂ ರಕ್ತ ತೆರುಕಾಗಲ್ಲ ಎಂದಾಗಲೇ ಗೊತ್ತಾದದ್ದು.. ಇವಳಿಗಾದ ಗಂಡಾಂತರ. ಖಾಯಿಲೆಯ ಗಂಡನೂ ಮೂರ್ಛೆ ಹೋಗಿ, ಇವಳು ತೆವಳಿಕೊಂಡು ಹೋಗಿ ಪಕ್ಕದವರನ್ನು ಕರೆದು, ಇಬ್ಬರೂ ಆಸ್ಪತ್ರೆಗೆ ಹೋಗುವಾಗ, ಆಸ್ಪತ್ರೆಯ ಗೇಟಿನ ಸಮೀಪದಲ್ಲಿಯೇ ನಾಗಮ್ಮನ ಪ್ರಾಣಪಕ್ಷಿ ಹಾರಿ ಹೋಗಿತ್ತಂತೆ.
ನಿನ್ನ ಅಪ್ಪನೂ ನೋಡಲು ಹೋಗಿದ್ದ ಅವಳನ್ನ.. ಅವಳ ಮಗಳು ವಿಷಯ ವಾರ್ಡ್ ಹತ್ತಿರ ಬಂದು ನೋಡಲು ಅವಳಪ್ಪಅಪ್ಪ ಡ್ರಿಪ್ ಚುಚ್ಚಿಸಿಕೊಂಡು ಒಂದು ಮೂಲೆಯಲ್ಲಿದ್ದರೆ, ನಾಗಮ್ಮನ ಕಳೇಬರ ಒಂದು ಮೂಲೆಯಲ್ಲಿತ್ತಂತೆ. ಅವಳನ್ನು ನೋಡಲು ಅದೆಷ್ಟೋ ಜನರಂತೆ. ಬಂದು ತಬ್ಬಿದ ಅವಳ ಮುದ್ದಿನ ಪುಟ್ಟಿ ಹೇಳಿದ ಕಡೆಯ ಮಾತು ಒಂದೇಯಂತೆ.. 

"ಅಮ್ಮಾ.. ನಿನ್ನೆಯಂತೂ ಫೋನಲ್ಲಿ ಮಾತಾಡಲಿಲ್ಲ.. ಇವತ್ತಾದರೂ ಮಾತಡಮ್ಮಾ. ನನ್ನೊಂದಿಗೆ ಮಾತಾಡೂಕೆ ಈಸ್ಟಾ ಇಲ್ಲವ? ಒಂದೇ ಒಂದು ಸಾರಿ ಮಾತಾಡಿ ಹೋಗಮ್ಮ.. ಒಂದೇ ಒಂದು ಸಾರಿ'.. ಕೇವಲ ಒಂದು ಸಾರಿ.."

ಇಷ್ಟು ಹೇಳಿ ಮುಗಿಸುವಾಗಲೇ ಅಮ್ಮನ (ಅಜ್ಜಿ) ವಯಸ್ಸಾದ ಕಣ್ಣುಗಳು ಹನಿಗೂಡಿದ್ದವು. ಅವುಗಳ ದಿಟ್ಟಿಸಿ ನೋಡುವ ಧೈರ್ಯವಿಲ್ಲದ ನಾನೂ ಮೇಲೆ ಇನ್ನೆಲ್ಲೋ ದಿಟ್ಟಿಸಿದ್ದೆ. ರೊಟ್ಟಿಯೂ ಸೀಡಿಹೋಗಿತ್ತು. ಮನಸ್ಸುಗಳೂ ಸಹ.

ಹೆಚ್ಚು ಹೊತ್ತು ಅಲ್ಲೇ ನಿಂತರೆ, ನಾನು ಎಲ್ಲಿ ಅತ್ತುಬಿಡುವೇನೋ ಎಂದು ಭಯಗೊಂಡು, ಪಕ್ಕದ ಕೋಣೆಗೆ ಧಾವಿಸಿದವನೆ ಕಿಟಕಿ ತೆಗೆದು ತುಂಬಿದ ಹಸಿರೆಡೆಗೆ ಕಣ್ಣು ಹಾಯಿಸಿದೆ. ಅದೆಷ್ಟೇ ದಿಟ್ಟಿಸಿಯೂ ಕಂಡದ್ದು ಕೊನೆಯಿಲ್ಲದ ದಿಗಂತ.. ದಶದಿಕ್ಕುಗಳಿಂದಲೂ 'ಅಮ್ಮ, ಒಂದು ಸಾರಿ ಮಾತಾಡಿ ಹೋಗಮ್ಮಾ' ಎನ್ನುವ ಮಾತುಗಳು ಹೃದಯ ಹಿಂಡಿದಂತಾಗುತ್ತಿತ್ತು.

ಭಾವನೆಗಳು ಉಕ್ಕೀದಾಗಲೇ ಬರೆಯಲು ಪ್ರೇರಣೆ ಬರುವುದು ಎಂಬ ಮಾತು ಸುಳ್ಳಲ್ಲ. ಸುಮ್ಮನಿರಲಾರದೇ, ಅಪ್ಪನ ಲೆಕ್ಕದ ಪುಸ್ತಕ ತೆಗೆದು ಬರೆಯುತ್ತಿರುವಾಗಲೇ ನಾಗಮ್ಮನ ಫೋಟೋ ನೋಡುವಾಸೆಯಾಯಿತು. ಅಮ್ಮನ ಕೇಳಲಾಗಿ, ಅಪ್ಪನ ಮದುವೆ ಆಲ್ಬಮ್ ನೋಡೆಂದಾಗ. ಬೀರು ತೆಗೆದು ಧೂಳು ಹೊಡೆದು ಅಮ್ಮ ಬಂದು ಫೋಟೋ ತೋರಿಸಿದಾಗ ಮನಕ್ಕೆ ಬಂದಿದ್ದು ಒಂದೇ ಸಂಗತಿ.






"ಛೇ.. ವಿಧಿಯೇ..ನೀ ಅದೆಷ್ಟು ಕ್ರೂರ..."



No comments:

Post a Comment