Friday, March 16, 2012

ಕೆರಿಯಪ್ಪನ ಕಥೆ..


ಅರೆರೆ.. ಭಲೇ ಚಾಲಾಕಿ ಆಗ್ಬಿಟ್ವೂ ಬಿಡ್ರೀ ಈಗಿನ ನಾಯಿಗಳು.. ಯಾಕಪ್ಪಾ ಇದ್ಕಿದ್ದಹಾಗೆ ಈತ ನಾಯಿ ಕಥೆ ಹೇಳೋಕ್ ಶುರು ಹಚ್ಕೋತಾ ಇದಾನೆ ಅಂದ್ಕೊಂಡ್ರಾ?



ಸುಮ್ನೇ ಸುಮ್ನೇ ಯಾರಾದ್ರೂ ಬರೀತಾರ? ನೀವೇ ಹೇಳಿ. ಇವತ್ತು ಬರ್ಯೋಕೆ ಸ್ಪೂರ್ತಿ ಕೊಟ್ತೊನೆ ನಮ್ ಏರಿಯ 'ಕೆರಿಯಪ್ಪ'. ಅವನ ಹುಟ್ಟು ಹೆಸ್ರು ಗೊತ್ತಿಲ್ಲ.. ತೇಟ್ ನಮ್ಮ ಕನ್ನಡ ಫಿಲ್ಮ್ ಹೀರೊ ತರ. ನೆನ್ಸ್ಕೊಳಿ ಒಮ್ಮೆ ನಮ್ಮ ಕನ್ನಡ ಚಿತ್ರಗಳ್ನ. ಹೀರೋ ಎಲ್ಲಿ ಹೋದ್ರೂ ಅನಾಥ.. ಪಾಪ ಅವ್ನ್‍ಗೆ ಅವನ ಹೆಸ್ರೂ ಕೂಡ ಗೊತ್ತಿರೋದಿಲ್ಲ.. ಆಮೇಲೆ ಅವ್ನಿಗೆ ಇನ್ಯಾರೋ ಹೆಸರಿಡ್‌ತಾರೆ. ಹೆಸರೀಡೋಕೂ ಒಂದು ಕಾರಣ ಬೇಕಲ್ವಾ? ಆ ಕಾರಣನೆ ಇವತ್ತಿನ್ ಕಥೆ, ಅದೇ ಇವತ್ತಿನ ಹೈ ಲೈಟ್!!!

ಕೆರಿಯಪ್ಪ ಮೊದ ಮೊದಲ್ಗೆ ತುಂಬಾ ಸಭ್ಯಸ್ಥ. ಯಾರ್‍ಗೂ ಏನೂ ತೊಂದ್ರೆ ಕೊಡದ ಆಸಾಮಿ. ಸುಮ್ನೇ ಬೇಕರಿ ಎದುರ್ಗೆ ಕೂತು ಆವ್ರು ಇವ್ರು ತಿನ್ನೋ ತಿಂಡಿನ ನೋಡ್ತಾ ಕೂತ್ಬಿಡೋದು. ಯಾರಾದ್ರೂ 'ಅಯ್ಯೋ ಪಾಪ' ಆನ್ಸಿ ಒಂದ್ ಪೀಸ್ ಹಾಕಿದ್ರೆ ಅದನ್ನ ತಿಂಡ್ಬಿಟ್ಟು ಕಣ್ಣಲ್ಲೇ ಒಂದ್ ಥ್ಯಾಂಕ್ಸ್ ಹೇಳೋ ಹ್ಯಾಂಡ್‌ಸಮ್ ಹೀರೊ. ಪಾಪ ಅವನಿಗೂ ಇತ್ತೀಚೆಗೆ ಲೈಫ್ ಬೋರ್ ಆಗ್ಬಿಟ್ಟಿದೆ. ಇತ್ತೀಚೆಗೆ ಯಾವಾಗ್ಲೋ ಒಮ್ಮೆ ಟೀವೀಲೀ ಅನಿಮಲ್ ಪ್ಲ್ಯಾನೆಟ್ ಡಿಸ್ಕವರೀ ಲೀ ಫನ್ನಿಯೆಸ್ಟ್ ಅನಿಮಲ್ ಪ್ರೋಗ್ರಾಮ್ ನೋಡ್ಬಿಟ್ಟ ಅನ್ಸುತ್ತೆ. ಅದೇ ತರ ಆಡೋಕೆ ಶುರು ಹಚ್ಕೊಂಡ. ಏನಂತೀರಾ?!! ಅದೇ ರೀ ಕಾಲೆತ್ತೋಡು ತಿಂಡಿ ಇಟ್ಕೊಂಡೋರ್‌ನ ತಿಂಡಿ ಕೊಡೋವರೆಗೂ ಕೆರಿಯೋದು!!!!



ಹೀಗೆ ಕೆರಿಯಪ್ಪ ಮಾಡಿದಾಗೆಲ್ಲ ಜನ್ರೂ ಫುಲ್ಲ್ ಖುಷ್. "ನೋಡ್ರೀ ಈ ನಾಯಿ ಎಸ್ಟ್ ಚೆನ್ನಾಗ್ ಕೆರಿಯುತ್ತೆ". "ಏ ಶಂಕ್ರ, ಕೊಡೋ ಎರಡು ಬಿಸ್ಕೆಟ್ ಈ ಕಡೆ, ನಾಯಿ ಯಾಕೋ ಬೋ ಕೆರತೈತೆ. ತಡಯಾಕ್ ಆಗ್ತಾ ಇಲ್ಲ."

ವಿಧ ವಿಧವಾದ ಮಾತುಗಳ ನಡುವೆ ಮಜಾ ಮಾಡಿದವನೇ ನಂ ಕೆರಿಯಪ್ಪ. ತಿಂದ ತಿಂದಾ.. ತನ್ನ ಪಾಪ್ಯುಲಾರಿಟಿ ನೂ ಜಾಸ್ತಿ ಮಾಡ್ಕೊಂಡ.. ಲೈಫು ಫುಲ್ಲ್ ಖುಷ್ ಆಗಿ ಹೋಗ್ತಾ ಇರ್ಬೇಕಾದ್ರೆ ಒಂದಿನ...

ಇಂಟರ್‌ವ್ಯೂ ಅಂತ ಖುಶಿಲಿದ್ದ ನಂ ಸಿದ್ಧ.. ಬಿಳಿ ಪ್ಯಾಂಟು ಷರ್ಟು ಧರಿಸಿ ಪ್ರಪಂಚ ಗೆಲ್ಲೋಕೂ ಆತ ಸಿದ್ಧ. ಪ್ರಶ್ನೆಗಲ್‍ನೆ ಉತ್ತ್ರ ಮಾಡಿಕೊಳ್ಳೊದಾಗಿ ಊಹಿಸಿದ್ಧ.. ಆಗ್ಲೇ ಸ್ವಲ್ಪ ಮಳೆ ಬಂದಿತ್ತು. ಮಳೆ ಬಂದಾಗ ಬೆಂಗಳೂರು ಹೆಂಗಿರುತ್ತೆ ಅಂತ ಕೇಳ್ಬೇಕಾ? ಹನಿಮೂನ್ಗೆ ಸಿದ್ಧ ಆಗಿರೋ ಜೋಡಿ ಹಾಗೆ.. ಸಿದ್ಧಂಗು ಒಂದು ಚಾ ಮತ್ತೆ ಒಂದು ವೆಜ್ ಪಫ್ ಆಸೆ ಆಯ್ತು ಅನ್ಸುತ್ತೆ..
ಹ್ಮ್.. ಫುಲ್ಲ್ ಟಿಪ್ ಟಾಪ್ ಆಗಿ ಬಂದವ್ನೇ ಸಿದ್ಧ ಶಂಕ್ರನ ಬೇಕರಿ ಗೆ ಒಂದು ಚಾ ಹಾಕ್ಕೊಂಡ್ ಹೋಗೋಣ ಅಂತ ಬಂದ. "ಶಂಕ್ರ, ಒಂದು ಒಳ್ಳೇ ಖಡಕ್ ಚಾ ಮತ್ತೆ ಒಂದು ಪಫ್ಫು ಕೊಡೋ" ಅಂತ ಹೇಳಿದ್ದೆ ತಡ, ಅಲ್ಲೇ ಇದ್ರೂ ನೋಡ್ರೀ ನಮ್ಮೆರೀಯ ಹೀರೋ. ಬಂದ್ರಪ್ಪ ಬಂದ್ರೂ ಜೋಧಾ ಅಕ್ಬರ ಲೀ ನಂ ಹ್ರಿತಿಕ್ ರೋಷನ್ ತರ ಕೆರಿಯಪ್ಪ..  ಜಿಂಗಾಲಾಲ.. ಸಿದ್ಧನ ಕೈಲಿ ತಿಂಡಿ ನೋಡಿದ ಖುಷಿಯಲ್ಲಿ ಅವನ ಉಜಾಲ ಹಾಕಿದ ಬಿಳಿ ಪ್ಯಾಂಟ್ ಮೇಲೆ ತಮ್ಮ ಚಿನ್ನದ ಬಣ್ಣದ ಕೆಸರು ತುಂಬಿದ ಪಂಚ ನಖಗಳಿಂದ?! ಹ್ಮ್.. ಅದ್ನೆ ಮಾಡಿದ್ದು..

ಪಾಪ ದೇವೇಗೊವಡ್ರಾಗಿದ್ರೆ ಮಣ್ಣಿನ ಮಗ ಅಂತ ಸುಮ್ನೇ ಆಗಿರೋರು ಅನ್ಸುತ್ತೆ.. ಸಿದ್ಧ ಅಲ್ವಲ್ಲ!! ಪಾಪ ಅವ್ನಿಗೆ ಗೊತ್ತೂ ಆಗ್ಲಿಲ್ಲ..

ಮುಂದಿನ ಕಥೆ.. ?!! ಹೀಗೂ ಉಂಟೆ..!!!!   ಅದೇ.. ನೀವು ಅಂದ್ಕೊಂಡ ಹಾಗೆ..!!!



(ಗಮನಿಸಿ: ಚಿತ್ರದಲ್ಲಿರುವುದು ಒರಿಜಿನಲ್ ಕೆರಿಯಪ್ಪ ಆಗಿರುವುದಿಲ್ಲ. ನಿಜವಾದ ಚಿತ್ರ ಸಿಕ್ಕಾಗ ಬಿಂಬಿಸಲಾಗುವುದು)




No comments:

Post a Comment