ಅಮ್ಮನ ಮುತ್ತು ಪಡೆದದ್ದಂತೂ ಇತಿಹಾಸ. ಬಹುಶಃ ನನ್ನ ಒಂದನೇ ಎರಡನೆ ತರಗತಿಯಲ್ಲಿರಬಹುದು. ಅಮ್ಮ ನನ್ನನ್ನು ಮುದ್ದಾಗಿ ಬೆಳಸುವುದಕ್ಕಿಂತಲೂ ಪ್ರಜ್ಞಾವಂತನನ್ನಾಗಿ ಬೆಳೆಸಿದರೆನ್ದರೂ ತಪ್ಪಾಗಲಾರದು..
ಇಂದು ಆ ಮುತ್ತಿನ ಅನುಭವ ಮತ್ತೊಮ್ಮೆ ಆಗಿದ್ದು ಕೇಸರಿ,ಬಿಳಿ,ಹಸಿರು ಕುಂಚ ಹಿಡಿದು ಕೆನ್ನೆ ಮೇಲೆ ರಂಗು ಬಳಿದ ಆ ಮಹಾತಾಯಿಂದಲೇ..!! ಅವಳಾರೊ ತಿಳಿಯದು.. ಸಿಕ್ಕದ್ದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ..!! ಸಂಬಂಧ ಬೆಸೆದದ್ದು ಇವತ್ತಿಂದ ಜನ ಆಂದೋಲನದಲ್ಲಿ ಲೊಕಪಾಲದ ಹೆಸರಿನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ರಂಗು ತುಂಬಿದ ಅದ್ಭುತ ನೇತಾರ ಅಣ್ಣಾ ಹಜಾರೆಗೆ ನನ್ನದೊಂದು ವಿನಮ್ರ ನಮನ..
ಚಿಣ್ಣರಿಂದ ವ್ರುದ್ಧರವರೆಗು ಪುಟಿದ ಉತ್ಸಾಹ.. "ವಂದೇ ಮಾತರಮ್".. "ಬೋಲೋ ಭಾರತ್ ಮಾತಾ ಕೀ ಜೈ" ಎಂಬ ರಾಷ್ಟ್ರೀಯ ರಜೆದಿನಗಳಿಗಷ್ಟೇ ಸೀಮಿತವಾಗಿದ್ದ ಘೋಷಣೆಗಳು ಇವತ್ತಿಗೆ ತಹಬದ್ದಿನ ರೂಪ ಪಡೆದವು..
ಕೆಲಸ ಬಿಟ್ಟು ಬಿಡುವನ್ನು ಪಡೆದಿದ್ದ ನನ್ನ ಮನಸಿನಲ್ಲಿ ಅದೆಂಥದೋ ಹೇಳಲಾಗದ ಒಂದು ತಪ್ಪಿತಸ್ಥ ಭಾವನೆ.. ವಾರ್ತಾ ಪ್ರಸಾರದಲ್ಲಿ ನಿರಂತರವಾಗಿ ನೋಡುತ್ತಿದ್ದ ಯುವ ಜನತೆಯ ಅಣ್ಣ ನಿಮ್ಮ ಹಿಂದೆ ನಾವಿದ್ದೇವೆ ಎಂದಾಗಲೆಲ್ಲ.. ನಾನಿಲ್ಲವೇ ಎಂಬ ವ್ಯಸನ.. ಸುಮ್ಮನಿದ್ದ ನಾನು ಎಲ್ಲದಕ್ಕೂ ರೆಡೀ ಇರೋ ಗೆಳೆಯ ದೀಪುವಿಗೇ ಕೇಳಿದಾಗ.. "ಯಾಕಿಲ್ಲ, ಪಬ್ ಕ್ಲಬ್ ಮಾತ್ರ ಗೆಳೆಥನಕ್ಕೆ ಮೀಸಲಲ್ಲ, ದೇಶವೂ ಕೂಡ.. ಮಂತ್ರಿಗಳ ಹುಟ್ಟಡಗಿಸೋಣ" ಎಂದಾಗ ಎಲ್ಲಿಲ್ಲದ ಉತ್ಸಾಹ.
ದಾರಿ ದಾರಿಯಲ್ಲೂ ಜನರ ಸಾಲು.. ನನಗೋ ನಡುವಲ್ಲಿ ಹೋಗಿ ಸೇರಲು ಮುಜುಗಾರ.. ಅಂತೂ ಇಂತು ಉದ್ಯಾನದವರೆಗೂ ಯಾವುದೋ ಒಂದು ಗುಂಪಿನ ಹಿಂದೆಯೇ ಹೋಗಿ ಜನರನ್ನು ಸೇರುತ್ತಲೇ ಆದ ಅನುಭವ ವರ್ಣಿಸಲಾಗದ್ದು.. ಅದನ್ನು ಅನುಭವಿಸಿದಾತನೆ ಬಲ್ಲ.. ರೋಮಗಳು ಸೆಟೆದು ನಿಂತು ಮೈ ಜುಂ ಎಂದಾಗಲಂತೂ ಕಣ್ಣನ್ನು ಮುಚ್ಚಿ ಭಾರತೀಯತೆಯನ್ನೊಮ್ಮೆ ಸಂಪ್ಪೊರ್ನವಾಗಿ ಅನುಭವಿಸಿದ ತನ್ಮಯತೆ.. ಎಷ್ಟು ಜನರು ದಿನವಿಡೀ ಮನೆಯಲ್ಲಿ ಕುಳಿಥು ಐಶಾರಾಮಿಯಾಗಿ ಟಿವಿ ನೋಡಿದರೋ ನಾ ಅರಿಯೆ.. ಆದರೆ, ಮನೆಯಲ್ಲಿದ್ದು ಒಂದು ಅದ್ಭುತ ಅನುಭವವನ್ನಂತೂ ಖಂಡಿತ ಕಳೆದುಕೊಂಡಾರು..
ಬನ್ನಿ ಯುವಕರೇ.. ಇನ್ನಾದರೂ ನಮ್ಮ ದೇಶವ ಕಟ್ಟುವ..
ಇಷ್ಟನ್ನು ಬರೆಯದೇ ಊಟ ಸಹ ಮಾಡಬಾರದೆಂದು ನನಗೆ ನಾನು ಶಪಥ ಮಾಡಿಕೊಂಡದ್ದಕ್ಕೆ ಹೆಮ್ಮೆಯೆನಿಸುತ್ತಿದ್ದೆ..
ಓದಿ ನಿಮ್ಮ ಅನುಭವ ಹಂಚಿಕೊಂಡರೆ, ನನ್ನಷ್ಟು ಸಂತೋಷಿಸುವವ ಇನ್ನೊಬ್ಬನಿಲ್ಲ..
ಇಂತೀ ನಿಮ್ಮ..
ರಕ್ಷಿತ..
Prathiyobba Bharathiyanu deshada eligegagi somarithanavannu bittu ANNA ge bembala Kottalli ANNA horatakke Jaya Kanditha......
ReplyDelete